ಹಾಸನ ನಗರ ಮಹಾಪಾಲಿಕೆಯ ಮೇಯರ್ ಎಂ ಚಂದ್ರೆಗೌಡರು ಕಾಳಿಕಾಂಬ ದೇವಾಲಯಕ್ಕೆ ಭೇಟಿ
Unknown Author
6/22/2025

ಹಾಸನ ಜೂ 21 : ನನ್ನ ಅಧಿಕಾರವಧಿಯಲ್ಲಿ ನಿರ್ವಂಚನೆಯಿಂದ ಕಾರ್ಯನಿರ್ವಹಿಸುವುದಾಗಿ ಹಾಸನ ಮಹಾನಗರಪಾಲಿಕೆಯ ಮೇಯರ್ ಎಂ. ಚಂದ್ರೇಗೌಡ ತಿಳಿಸಿದರು. ಅವರು ಶುಕ್ರವಾರ ಹಾಸನ ನಗರದ ಶ್ರೀ ಕ್ಷೇತ್ರ ಕಾಳಿಕಾಂಬ ಕಮಠೇಶ್ವರ ದೇವಾಲಯದಲ್ಲಿ ಹಾಸನ ಜಿಲ್ಲಾ ಮತ್ತು ತಾಲ್ಲೂಕು ವಿಶ್ವಕರ್ಮ ಸಮಾಜದ ಸಂಯುಕ್ತಾಶ್ರಯದಲ್ಲಿ ನೂತನ ಮೇಯರ್, ಉಪ ಮೇಯರ್ ಮತ್ತು ಮಹಾನಗರಪಾಲಿಕೆ ಸದಸ್ಯರಿಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಸಮಾಜದ ಕುಂದು ಕೊರತೆಗಳಿಗೆ ತಕ್ಷಣವೇ ಸ್ಪಂದಿಸಿ ಕಾರ್ಯನಿರ್ವಹಿಸುವುದಾಗಿ ಮೇಯರ್ ತಿಳಿಸಿದರು. ಇದೇ ಸಂದರ್ಭದಲ್ಲಿ ಹಾಸನ ಜಿಲ್ಲಾ ವಿಶ್ವಕರ್ಮ ಸಮಾಜದ ಅಧ್ಯಕ್ಷರಾದ ಹೆಚ್. ವಿ. ಹರೀಶ್ ಮಾತನಾಡಿ, ಹಾಸನ ಜಿಲ್ಲೆ ಶಿಲ್ಪಕಲೆಗಳ ತವರೂರೆಂದು ಪ್ರಖ್ಯಾತಿಯಾಗಲು ಮತ್ತು ಜಿಲ್ಲೆಯ ಬೇಲೂರು - ಹಳೇಬೀಡು ದೇವಾಲಯಕ್ಕೆ ಪ್ರವಾಸಿಗರನ್ನು ಸೆಳೆಯಲು ತಮ್ಮ ಕಲೆಯ ಮೂಲಕ ಪ್ರವಾಸೋದ್ಯಮದ ಅಭಿವೃದ್ಧಿಗೆ ಕಾರಣೀಭೂತರಾಗಿ ವಿವಿಧ ವ್ಯಾಪಾರ, ಉದ್ಯಮದ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡಿರುವ ಅಮರಶಿಲ್ಪಿ ಜಕಣಾಚಾರ್ಯರ ಹೆಸರನ್ನು ಹಾಸನ ನಗರದ ಪ್ರಮುಖ ವೃತ್ತವೊಂದಕ್ಕೆ ನಾಮಕರಣ ಮಾಡಬೇಕೆಂದು ಮನವಿ ಮಾಡಿದರು. ಈ ಕಾರ್ಯಕ್ರಮದಲ್ಲಿ ಉಪ ಮೇಯರ್ ಎನ್. ಹೇಮಲತ ಕಮಲ್ ಕುಮಾರ್, ನಗರಪಾಲಿಕೆ ಸದಸ್ಯೆ ಜಯಲಕ್ಷ್ಮಿಯವರ ಪತಿ ಪುನೀತ್, ಹಾಸನ ಸಿಟಿ ಕ್ಲಬ್ ಚುನಾವಣೆಯಲ್ಲಿ ನಿರ್ದೇಶಕರಾಗಿ ಆಯ್ಕೆಯಾದ ಮಾಜಿ ನಗರಸಭಾ ಸದಸ್ಯ ಹೆಚ್. ಆರ್. ಪ್ರಸನ್ನಕುಮಾರ್ ಹಾಗೂ ವಾರದ ವಿಶೇಷ ಪೂಜಾ ಕಾರ್ಯಕ್ರಮದ ಸೇವಾರ್ಥದಾರರಾದ ಪಲ್ಲವಿ ಎಂ. ಸಿ. ಮತ್ತು ಕೇಶವ ಬಿ. ಡಿ. ದಂಪತಿಗಳನ್ನು ಸಮಾಜದ ವತಿಯಿಂದ ಸನ್ಮಾನಿಸಲಾಯಿತು. ಹಾಸನ ತಾಲ್ಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ಹೆಚ್. ಬಿ. ಕುಮಾರಾಚಾರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಿಶ್ವಕರ್ಮ ಸಮಾಜದ ಉಪಾಧ್ಯಕ್ಷ ಎ. ಸಿ. ನಾರಾಯಣ್, ಖಜಾಂಚಿ ಕೆ. ಎಸ್. ಜಗದೀಶ್, ನಿರ್ದೇಶಕರಾದ ಜಿ. ಎಸ್. ಜಯರಾಜ್, ಅನಿಲ ಪದ್ಮನಾಭ, ಕೆ. ಟಿ. ಯೋಗೇಶ್, ಹಾಸನ ತಾಲ್ಲೂಕು ವಿಶ್ವಕರ್ಮ ಸಮಾಜದ ಉಪಾಧ್ಯಕ್ಷ ಎ. ಬ್ಯಾಟರಂಗಾಚಾರ್, ಪ್ರಧಾನ ಕಾರ್ಯದರ್ಶಿ ಟಿ. ಕೇಶವಪ್ರಸಾದ್, ಖಜಾಂಚಿ ಬಿ. ಲೋಕೇಶ್, ನಿರ್ದೇಶಕರಾದ ಹೆಚ್. ಎಸ್. ಆನಂದ್, ಎಂ. ಟಿ. ಸುರೇಶ್, ಪಿ.ಟಿ. ಗೋಪಾಲ್, ಹೆಚ್. ಕೆ. ಶ್ರೀಕಂಠಮೂರ್ತಿ, ಸುದೇವನ್, ತಾಲ್ಲೂಕು ವಿಶ್ವಕರ್ಮ ಸಮಾಜದ ಮಾಜಿ ಅಧ್ಯಕ್ಷ ಜಿ. ಆರ್. ತಿಮ್ಮಾಚಾರ್, ತಾಲ್ಲೂಕು ವಿಶ್ವಕರ್ಮ ಯುವಕ ಸಮಾಜದ ಕಾರ್ಯದರ್ಶಿ ಟಿ. ಎನ್. ಗಿರೀಶ್, ಕಾಳಿಕಾಂಬ ಸೊಸೈಟಿಯ ಅಧ್ಯಕ್ಷ ಪ್ರಭಾಕರ್, ಕಲಾಸಂಘದ ಅಧ್ಯಕ್ಷ ಎಂ. ಕೆ. ರಾಜಾಚಾರ್, ಕಾರ್ಯದರ್ಶಿ ಚಂದ್ರು ಮತ್ತು ಯು. ಎಸ್. ಅಯ್ಯಣ್ಣಚಾರ್ ಸೇರಿದಂತೆ ಸಮಾಜದ ಪ್ರಮುಖರು ಹಾಜರಿದ್ದರು. ವರದಿ: ಹೆಚ್ ವಿ ಹರೀಶ್ ಹಾಸನ




