ಹಳೆ ಶಾಲಾ ವಿದ್ಯಾರ್ಥಿಗಳಿಂದ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣೆ

Unknown Author

7/13/2025

ಹಳೆ ಶಾಲಾ ವಿದ್ಯಾರ್ಥಿಗಳಿಂದ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣೆ

ಮಡಿಕೇರಿ: ಜುಲೈ 5 ನೋಡಣ ಬನ್ನಿ ನಮ್ಮೂರ ಸರ್ಕಾರಿ ಶಾಲೆಯ ಅಂದ ಚೆಂದವ ಹಳೆ ವಿದ್ಯಾರ್ಥಿಗಳ ಸಂಘ ಮತ್ತು ಕ್ರೀಡಾ ತಂಡ (1988 - 89 ) ವತಿಯಿಂದ ದಿನಾಂಕ ಜುಲೈ 5 ರಂದು ಹಮ್ಮಿಕೊಂಡಿದ್ದ ಮುಳ್ಳೂರು ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆಯು ನಡೆಯಿತು.1988-89 ಇಸವಿಯಲ್ಲಿ ಮುಳ್ಳೂರು ಮತ್ತು ನಿಡ್ತ ಶಾಲೆಯಲ್ಲಿ ಓದಿದ ಮಕ್ಕಳು ಇಂದು ಸಮಾಜದ ಜವಾಬ್ದಾರಿಯತ ಪ್ರಜೆಗಳಾಗಿ ಬೆಳೆದು ತಾವು ಓದಿದ ಸರ್ಕಾರಿ ಶಾಲೆಯ ಶಿಕ್ಷಕರನ್ನು ನೆನಪಿಸಿಕೊಂಡು ಅವರನ್ನು ಗುರುತಿಸಿ ಸನ್ಮಾನಿಸುವಂತಹ ಮಹತ್ತರವಾದ ಕಾರ್ಯದೊಂದಿಗೆ ತಾವುಗಳು ಓದಿದ ಸರ್ಕಾರಿ ಶಾಲೆಯ ಅಭಿವೃದ್ಧಿಗಾಗಿ ಅಲ್ಲಿಯ ವಿದ್ಯಾರ್ಥಿಗಳಿಗೆ ಸಮಸ್ತ್ರವನ್ನು ವಿತರಿಸುವ ಮತ್ತು ಶಾಲೆಯ ಕೊರತೆಗಳನ್ನ ಗಮನಿಸಿ ಅವುಗಳನ್ನು ಪರಿಹರಿಸುವ ಭರವಸೆಯನ್ನು ನೀಡುವುದರೊಂದಿಗೆ ಮಹತ್ತರವಾದ ಕಾರ್ಯವನ್ನು ಮಾಡಿದರು ಈ ಒಂದು ಕಾರ್ಯಕ್ರಮವು ಶಾಲಾ ಶಿಕ್ಷಕರಾದ ಜಾನ್ ಪಾಲ್ ಡಿಸೋಜ ರವರ ನಿರೂಪಣೆ, ಶಾಲಾ ಮಕ್ಕಳ ಪ್ರಾರ್ಥನೆ ಹಾಗೂ ನಿವೃತ್ತ ಶಿಕ್ಷಕರಾದ ಡಿ ಬಿ ಸೋಮಪ್ಪನವರು ಮತ್ತು ಪಂಚಾಯಿತಿಯ ಅಧ್ಯಕ್ಷರಾದ ಅಶೋಕ್ ಟಿ ಕೆ ರವರು ಜ್ಯೋತಿ ಬೆಳಗಿಸಿ ಉದ್ಘಾಟಿಸುವುದರೊಂದಿಗೆ ಆರಂಭಗೊಂಡಿತು. ಸಂಘದ ಅಧ್ಯಕ್ಷರಾದ ಎಂ ಸಿ ಜಯಕುಮಾರ್ ರವರು ಮಾತನಾಡಿ "ನಾವೆಲ್ಲ ಆಂಗ್ಲ ಭಾಷೆಯ ವ್ಯಾಮೋಹಕ್ಕೆ ಒಳಗಾಗಿದ್ದು, ನಮ್ಮ ಮಕ್ಕಳನ್ನು ಕಾನ್ವೆಂಟ್ ಶಾಲೆಗಳಿಗೆ ಕಳುಹಿಸುತಿದ್ದೇವೆ. ಈ ಶಾಲೆಯು ಒಂದು ಅದ್ಭುತ, ವಿಸ್ಮಯ, ಚಮತ್ಕಾರ ಮತ್ತು ನನ್ನನ್ನುಮೂಕನನ್ನಾಗಿಸಿದೆ, ವೈಜ್ಞಾನಿಕವಾಗಿ ಭೌತಿಕವಾಗಿ, ಕ್ರಿಯಾತ್ಮಕವಾಗಿ, ನಮಗೆ ಕಲ್ಪನಾತೀತವಾದ, ಅಭೂತಪೂರ್ವ ಬೋಧನಾ ಜಗತ್ತನ್ನು ಸೃಷ್ಟಿಸಿದೆ. ಈ ಸರ್ಕಾರಿ ಶಾಲೆ ಹೇಳಲು ಮಾತ್ರವೇ ಇದು ಕಿರಿಯ ಶಾಲೆ ಆದರೇ ರಾಷ್ಟ್ರ ಮತ್ತು ವಿಶ್ವಸ್ಥರದ ಬೋಧನಾ ಮಟ್ಟವಿದೆ, ತಮ್ಮಲ್ಲೇ ಸಿಗುವ ವಸ್ತುಗಳನ್ನು ಉಪಯೋಗಿಸಿಕೊಂಡು ಶಿಕ್ಷಕರ ಕಲ್ಪನೆಯಿಂದ ಸೌರ ಮಂಡಲ, ಸ್ಮಾರ್ಟ್ ಕ್ಲಾಸ್ ಹೀಗೆ ಹತ್ತು ಹಲವು ಪರಿಕಲ್ಪನೆಗಳು ಮೂಡಿಬಂದಿದೆ, ಇದು ನಿಜಕ್ಕೂ ವಿದ್ಯಾ ದೇಗುಲವೇ ಸರಿ ನಮಗೆ ಕೈ ಮುಗಿದು ಒಳಗೆ ಬರಬೇಕೆಂದು ಅನಿಸಿದೆ " ಎಂದು ಅಭಿಪ್ರಾಯ ಪಟ್ಟರು. ಯಸ್,ಡಿ ಎಂ ಸಿ ಅಧ್ಯಕ್ಷರಾದ ಪಂಕಜ ರವರು, ಸ್ಥಳೀಯರಾದ ಸುಬ್ಬಪ್ಪ ಮತ್ತು ನಿವೃತ್ತ ಶಿಕ್ಷಕಿಯವರಾದ ಸ್ವಾತಿ ರವರು ಶಾಲಾ ಮಕ್ಕಳಿಗೆ ಸಮವಸ್ತ್ರವನ್ನು ವಿತರಿಸಿದರು, ಮಾಜಿ ಸೈನಿಕರಾದ ಮುರುಗನ್ ರವರು ಸ್ವಾಗತಿಸಿ ಮತ್ತು ಮಾಜಿ ಸೈನಿಕರಾದ ರಾಮಕೃಷ್ಣ ಎಂ ಕೆ ರವರು ವಂದಿಸಿದರು ಸಂಘದ ಸದಸ್ಯರಾದ ಸುನಿಲ್ ಗೌಡಳ್ಳಿ, ರೇಖಲೋಕೇಶ್, ಹೇಮಲತಾ, ಮಲ್ಲೇಶ್ ಎಚ್ ಸ್, ವೀರಭದ್ರಪ್ಪ, ಯೋಗೇಶ್ , ಗಣೇಶ್, ಮಣಿ ಮತ್ತು ಮೋಹನಾಕ್ಷಿ ಜೆ,ಟಿ ಉದಯ್, ಅಶೋಕ, ಉಪಸ್ಥಿತರಿದ್ದರು ಯಸ್,ಡಿ ಎಂ ಸಿ ಅಧ್ಯಕ್ಷರಾದ ಪೂಜಾ, ಗ್ರಾಮ ಪಂಚಾಯಿತಿ ಸದಸ್ಯರಾದ ತೀರ್ಥನಂದ, ವೆಂಕಟೇಶ್, ಕಾರ್ತಿಕ್, ಆನಂದ್ ಮತ್ತು ಪುಟ್ಟಸ್ವಾಮಿ ಉಪಸ್ಥಿರಿದ್ದರು, ಸಿ ಆರ್ ಪಿ ಯವರಾದ ದಿನೇಶ್, , ಸರಳ ವ್ಯಕ್ತಿತ್ವ ರಾಜ್ಯ ಪ್ರಶಸ್ತಿ ಹಾಗೂ ಮುಖ್ಯೋಪಾಧ್ಯರು ವಿಜೇತರಾದ ಸತೀಶ್, ಜ್ಞಾನದೀಪ ಶಿಕ್ಷಕಿ ಶೀಲಾ, ಶಾಲಾ ಮಕ್ಕಳ ಸಹಯೋಗದಿಂದ ಸಮವಸ್ತ್ರ ವಿತರಣಾ ಕಾರ್ಯಕ್ರಮವು ವಿಜೃಂಭಣೆಯಿಂದ ನಡೆಯಿತು. ವರದಿ: ಎಂ ಸಿ, ಜಯಕುಮಾರ್