ಮಳೆಗಾಲವು ಮಲೆನಾಡಿಗರ ಸ್ವರ್ಗ

Nannuru-team

Nannuru-team

7/16/2025

ಮಳೆಗಾಲವು  ಮಲೆನಾಡಿಗರ ಸ್ವರ್ಗ

ಮಳೆಗಾಲವು ಮಲೆನಾಡಿಗರ ಸ್ವರ್ಗ ಜೂನ್ ಮತ್ತು ಜುಲೈ ತಿಂಗಳಲ್ಲಿ ಅರಬ್ಬಿ ಸಮುದ್ರದ ಕಡೆಯಿಂದ ಬೀಸುವ ಮಳೆಯ ಮಾರುತಗಳು ಪಶ್ಚಿಮ ಘಟ್ಟದ ಬೆಟ್ಟಗಳನ್ನು ತಡೆದು ಮಳೆಕಾಡುಗಳಾಗುತ್ತವೆ, ಮೊಡಗಳು ಬೆಟ್ಟಗಳನ್ನು ನಂಗಿ ಬಿಟ್ಟಿರುತ್ತವೆ,ಇದನ್ನ ನಾವು ಆಷಾಡ ಶ್ರಾವಣ ಎನ್ನುತ್ತೇವೆ, ಮನುಷ್ಯರು ಬೆಟ್ಟದಲ್ಲಿ ಇದ್ದರೆ ಮೊಡದ ಮಧ್ಯೆಯೆ ಇದ್ದ ಅನುಭವ ಆಗುತ್ತದೆ, ಉಕ್ಕಿ ಹರಿಯುವ ನದಿಗಳು ತುಂಬಿದ ಕೆರೆಗಳು, ಕೆನೆಹಾಲಿನಂತೆ ದುಮ್ಮಿಕ್ಕುವ ಜಲಪಾತಗಳು ಈ ಸೌಂದರ್ಯವನ್ನು ನೊಡುವುದಿದೆಯಲ್ಲ ಭೂಮಿಯ ಮೇಲಿನ ಸ್ವರ್ಗ, ಆಷಾಡ ಶ್ರಾವಣ ಮಾಸಗಳು ಮಲೆನಾಡಿಗರ ಹೊಸ ಪ್ರಪಂಚವನ್ನೆ ಸೃಷ್ಟಿಸುತ್ತದೆ, ಅದೊಂದು ಕಾಲಾ ಇತ್ತು , ಇಲ್ಲಿಯವರ ಆಹಾರ ಪದ್ದತಿ ಎಂದರೆ ಅಕ್ಕಿ, ಆ ಅಕ್ಕಿಬೇಕು ಅಂದರೆ ಭತ್ತ ಬೆಳೆಯಬೇಕು, ಅದಕ್ಕಾಗಿ ಗದ್ದೆಗಳನ್ನು ಹದ ಮಾಡಬೇಕು, ಅದಕ್ಕಾಗಿ ಹುಡಿ ಅಗೆ ಅಥವ ನೀರಗೆ ಅಂದರೆ ಮೊದಲೆ ಭತ್ತದ ಪೈರನ್ನ ನಾಟಿಮಾಡಲು ಸಿದ್ದಮಾಡಿಕೊಳ್ಳುವುದು, ಗಂಡುಮಕ್ಕಳು ತಲೆ ಮೇಲೆ ಕೊರಗ ಹೆಗಲಮೇಲೆ ನೇಗಿಲು ನೊಗ ಕೈಯಲ್ಲಿ ಎತ್ತುಗಳು, ಗದ್ದೆಗಳನ್ನ ಹದಮಾಡಿದರೆ ಮಹಿಳೆಯರು ಭತ್ತದ ಪೈರನ್ನ ನಡುವರು ಜಾನಪದ ಹಾಡುಗಳನ್ನ ಹಾಡುತ್ತ ಸಂತೋಷ ಪಡುತ್ತಿದ್ದರು, ಮಳೆಗಾಲ ಬಂತೆಂದರೆ ಸಾಕು ಹುಲ್ಲೇಡಿಗಳು ಕಾಣಿಸಿಕೊಳ್ಳುತ್ತವೆ, ಅವುಗಳನ್ನು ತಿಂದು ರಾತ್ರಿಯಲ್ಲಿ ಊಳಿಡುವ ನರಿಗಳು, ಕೊರಗ ಇಲ್ಲಿ ಮಳೆಯಿಂದ ರಕ್ಷಣೆ ಮಾಡಿಕೊಳ್ಳುವ ಸಾಧನ, ಕುಳಿ ಮೀನು ಹಿಡಿಯುವ ಸಾಧನ, ಕೂರಿಗೆ, ಈಗ ಇವೆಲ್ಲ ಕಣ್ಮರೆ ಯಾಗುತ್ತ ಸಾಗುತ್ತಿವೆ, ಇವುಗಳ ಜಾಗದಲ್ಲಿ ಕಾಫಿ, ಅಡಿಕೆ , ಮುಂತಾದ ವಾಣಿಜ್ಯ ಬೆಳೆಗಳು ಬಂದಿವೆ, ಈ ಸಮಯದಲ್ಲಿ ತಂಪಾದ ವಾತಾವರಣ ಇರುವುದರಿಂದ ಬಿಸಿ ಕಾಫಿ, ಇಲ್ಲಿಯ ವಿಶೇಷ ಆಹಾರ ಎಂದರೆ ಕಡಬು(ಅಕ್ಕಿಯ ತರಿಯಿಂದ ಹಬೆಯಲ್ಲಿ ಬೇಯಿಸುವುದು,) ಮಾಂಹಹಾರಿಗಳಿಗೆ ಮೀನು ಇಷ್ಟವಾದ ಆಹಾರ, ಮಳೆಗಾಲದಲ್ಲಿ ನದಿಯಲ್ಲಿ ಸಿಗುವ ಮೀನು ತುಂಬ ರುಚಿಯಾಗಿರುತ್ತದೆ ಎಂದು ಅನುಭವದವರು ಹೇಳುವರು, ಮಧ್ಯ ಮಾಂಸಹಾರಿಗಳ ಸ್ವರ್ಗ ಎಂದೆ ಹೇಳಬಹುದು, ಮಲೆನಾಡಲ್ಲಿ ಸಿಗುವ ಬೇರಣಬೆ ಬಹಳು ರುಚಿಯಾಗಿರುತ್ತದೆ ಹುತ್ತದ ಅಣಬೆ ಕೂಡ ರುಚಿಯಾಗಿರುತ್ತದೆ, ಸಸ್ಯ ಹಾರಿಗಳು ವಿವಿಧ ಭಕ್ಷ್ಯಗಳನ್ನು ಮಾಡುವರು ಕೆಸವಿನ ವಡೆ ಬಹಳ ಜನರಿಗೆ ಇಷ್ಟವಾಗುವ ಪದಾರ್ಥವಾಗಿದೆ, ಮಲೆನಾಡಿನಲ್ಲಿ ಮೂರು ಕಾಲಗಳು ಮಳೆಗಾಲ, ಚಳಿಗಾಲ, ಬೆಸಿಗೆ ಕಾಲ, ವಿದ್ಯುತ್ ಇಲ್ಲದ ಕಾಲದಲ್ಲಿ ಸಂಪರ್ಕವಿಲ್ಲದ ಕಾಲಾದಲ್ಲಿ ಹೇಗಿರಬಹುದು ಮಲೆನಾಡು...? ಹಾಡಿಗಳು ಹಳ್ಳಿಗಳಾದವು, ಹಳ್ಳಿಗಳು ನಗರ ಗಳಾದವು, ಬರಹ: ಆಕಾಶ್ ಎಸ್